Thursday, March 8, 2012

ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳು



ಅಪೂರ್ವ ಅರುಣೋದಯ

      ಶ್ರೀಕ್ಷೇತ್ರ ಆದಿಚುಂಚನಗಿರಿಯ ಧಾಮರ್ಿಕ ಕೈಂಕರ್ಯಕ್ಕೆ  ತಮ್ಮನ್ನೇ  ತಾವು ಸಮಪರ್ಿಸಿಕೊಂಡು 33 ಹಳ್ಳಿಗಳ ಧಾಮರ್ಿಕ ಆಡಳಿತವನ್ನು  ನೋಡಿಕೊಳ್ಳುತ್ತಿದ್ದ  ಸುಭೇದಾರ್ ಮನೆತನದ  ಶ್ರೀ ಚಿಕ್ಕಲಿಂಗಪ್ಪನವರ ಧರ್ಮಪತ್ನಿ  ಶ್ರೀಮತಿ ಬೋರಮ್ಮರವರು ಪರೋಪಕಾರ ಔದಾರ್ಯ ದೈವ ಭಕ್ತಿ ಸಹನೆ ನಿಸ್ವಾರ್ಥಗಳಿಗೆ ಹೆಸರಾದ ಅಂಚೆ ತಿಮ್ಮಯ್ಯನವರ ಮಗಳು ಪಟವಿಕ್ಕಿದ ಚಿನ್ನದಂತಿದ್ದಿತು, ಚಿಕ್ಕಲಿಂಗಪ್ಪ ಬೋರಮ್ಮನವರ ದಾಂಪತ್ಯ ಪರಸ್ಪರ ಗೌರವ, ದೈವ ಭಕ್ತಿ  ಧಾಮರ್ಿಕ ಶ್ರದ್ಧೆಗಳಲ್ಲಿ  ಸಮಾನ ಅಬಿರುಚಿ ಕರುಣೆ ಕ್ಷಮೆ ಈ ಎಲ್ಲಾ  ಗುಣಗಳಿಂದ ಅವರು ಆದರ್ಶ ದಂಪತಿಗಳಾಗಿದ್ದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಿಡದಿಯಿಂದ 3 ಕಿ.ಮೀ ದೂರದಲ್ಲಿ  ಹಸಿರು ಹಾಸಿನ ಹೊಲಗದ್ದೆಗಳ  ಮಧ್ಯದಲ್ಲಿರುವ ಬಾನಂದೂರು ಪ್ರಶಾಂತವಾದ ಗ್ರಾಮ. ಎತ್ತೆತ್ತ  ಕತ್ತು  ತಿರುಗಿಸಿದರೆ ಅತ್ತತ್ತ  ದೇವ ದೇವೆಗಳ ಸನ್ನಿಧಿ ಊರಿನಲ್ಲಿ  ಭಕ್ತಿಯ ವಾತಾವರಣವನ್ನುಂಟು ಮಾಡಿದೆ. ಬೆಳಗಿನ ಜಾವದಲ್ಲೇ ಮೂಡಿದ ಒಳ್ಳೆಯ ಕನಸಿನಿಂದ ಉಲ್ಲಸಿತರಾಗಿ ತಾಯಿ ಬೋರಮ್ಮರವರು ಎದ್ದರು. ಸ್ವಲ್ಪದಿನಗಳ ಹಿಂದಷ್ಟೆ  ತಾವು ಪತಿ ಚಿಕ್ಕಲಿಂಗಪ್ಪನವರೊಡನೆ ಮನೆದೇವರಾದ ಗಂಗಾಧರೇಶ್ವರನ ದರ್ಶನಕ್ಕೆ  ಆದಿಚುಂಚನಗಿರಿಗೆ ಹೋದಾಗ ತಮಗೆ ಪುತ್ರ ಸಂತಾನ ಪ್ರಾಪ್ತಿಗಾಗಿ ಅನನ್ಯ ಭಕ್ತಿಯಿಂದ ಬೇಡಿದ್ದು  ಅದಕ್ಕಾಗಿ ಕರುಣಾಕರ ಶಿವನು ಕನಸಿನಲ್ಲಿ  ಬಂದು ಪ್ರಸನ್ನಗೈದು ಆಕೆ ವಿಸ್ಮಿತರಾದರು ಪತಿಗೆ ಈ ಶುಭ ಸ್ವಪ್ನವನ್ನು  ತಿಳಿಸಲು ಕಾತುರರಾದರು. ವಿಚಾರವನ್ನು  ಕೇಳಿ ಪತಿಗೆ ಹಿಡಿಸಲಾರದಷ್ಟು  ಹಿಗ್ಗುಂಟಾಯಿತು.
ಕಾರಣಿಕ ಶಿಶುಗರ್ಭದಲ್ಲಿರುವಾಗಲೇ ತಾಯಿಗೆ ಅಪೂರ್ವವಾದ ಬಯಕೆಗಳು ದೇವಾಲಯಗಳಿಗೆ ಹೋಗಬೇಕು. ಸಾಧು ಸಂತರಿಗೆ ನಮಿಸಬೇಕು. ದೀನರಿಗೆ ಅನ್ನದಾನ ಮಾಡಬೇಕು ಇತ್ಯಾದಿ ಉದಾರವಾದ ನಿಸ್ವಾರ್ಥದ ಆಸೆಗಳು ನಡೆನುಡಿಯಲ್ಲಿ  ಕೋಮಲತೆಂುೆು ತುಂಬಿದ ಆ ತಾಯಿಗೆ ನವ ಮಾಸಗಳು ತುಂಬಿದವು.
ಬಾನಂದೂರೆಂಬ ರಮ್ಯ ಗ್ರಾಮದಲ್ಲಿ  ಪುಣ್ಯ ದಂಪತಿಗಳಾದ ಚಿಕ್ಕಲಿಂಗಪ್ಪ ಬೋರಮ್ಮನವರ 3ನೇಯ ಸಂತಾನವಾಗಿ ಗಂಗಾಧರೇಶ್ವರ ಕೃಪೆಯಿಂದ ಗಂಡು ಶಿಶುವೊಂದು ದಿನಾಂಕ : 18-01-1945ನೇ ಗುರುವಾರ ಬೆಳಗಿನ ಜಾವ 4.45ಗಂಟೆಗೆ ಶುಭ ಧನುರ್ಲಗ್ನದಲ್ಲಿ  ಭುವನದ ಭಾಗ್ಯವೋ ಎಂಬಂತೆ ಜನಿಸಿತು. ಮನೆಯವರಿಗಷ್ಟೇ ಅಲ್ಲದೇ  ಊರಿನವರಿಗೆಲ್ಲಾ  ಸಂಭ್ರಮವೆನಿಸಿತು.
ಹಳ್ಳಿಯ ಸಮಸ್ತರೂ ಮಗುವಿನ ಅಪೂರ್ವ ಲಾವಣ್ಯಕ್ಕೆ  ಕರಗಿದರು. ಊರಿನ ಕಣ್ಮಣಿಯಾಗಿಬಿಟ್ಟಿತು ಮಗು. ಕೆಲವೇ ದಿನಗಳಲ್ಲಿ  ಅನಿರೀಕ್ಷಿತವಾಗಿ ಬಂದ ಂುೋಗಿಂುೊಬ್ಬರು ಈ ಕಂದನನ್ನು  ಕಂಡು ಭೂಮಿಳಿದ ಶಿವಕಳೆ ಕಾರಣಿಕ ಪುರುಷನಿವನು ಇವನಿಂದ ಲೋಕಕಲ್ಯಾಣವಾಗುವುದು ಎಂದು ಭವಿಷ್ಯ  ನುಡಿದು ನಡೆದೇ ಬಿಟ್ಟರು. ಮನೆಯವರು ಈ ಮಾತು ಕೇಳಿ ದಿಗ್ಮೂಡರಾದರು.
ಮೌಢ್ಯ ಅಜ್ಞಾನ, ದಾರಿದ್ರ ್ಯಗಳ ನಿವಾರಣೆಗೆಂದೆ ಪರಶಿವನ ಪ್ರತಿನಿಯಾಗಿ ತೇಜೋರೂಪಿಯಾಗಿ ಅವತರಿಸಿದ ಆ ಶಿಶುವನ್ನು  ಹಡೆದ ತಾಯಿ ಮಹಾ ಭಾಗ್ಯಶಾಲಿನಿಂುೆು ಸರಿ. ಗಂಗಾಧರಯ್ಯನೆಂಬ ನಾಮಾಂಕಿತದೊಡನೆ, ತಾಯ್ತಂದೆಗಳಿಗೆ ವಿಧೇಯರಾಗಿ ಒಡಹುಟ್ಟಿದವರೊಡನೆ ಅನ್ಯೋನ್ಯವಾಗಿ ಬೆರೆತು ಸಾತ್ವಿಕವಾಗಿದ್ದರು. ಪುಟ್ಟಲಿಂಗಮ್ಮ , ಶಿವಮ್ಮ  ಎಂಬಿಬ್ಬರು  ತಂಗಿಯರು, ಮರಿಸ್ವಾಮಯ್ಯ ಎಂಬ ತಮ್ಮ  ಜೊತೆಗೂಡಿದರು. ಅಧ್ಯಯನ, ಆಧ್ಯಾತ್ಮ ವೈದ್ಯಕೀಯ ವಿಷಯಗಳಲ್ಲಿ  ಆಸಕ್ತಿ  ಪೂವರ್ಾಪರ ಯಾವುದನ್ನು  ವಿಶ್ಲೇಷಿಸದೆ ಕೂಡಲೇ ಯಾವುದನ್ನು  ನಂಬದ ವೈಚಾರಿಕ ಮನೋಭಾವ ಇವೆಲ್ಲಾ  ಅವರಿಗೆ ಸ್ವಭಾವತಃ ಇದ್ದ  ಗುಣಗಳೇ, ತಾತ ತಿಮ್ಮೇಗೌಡರು ಬಾಲಕ ಗಂಗಾಧರಯ್ಯನವರಿಗೆ ಉತ್ತಮ ಗುಣಗಳು ಪ್ರರ್ವಸಲು ಹೆಚ್ಚು  ಪ್ರೋತ್ಸಾಹಿಸಿದರು. ಬೆಳೆಯುವ ಪೈರು ಮೊಳಕೆಯಲ್ಲಿಂುೆು ಎಂಬಂತೆ ಮೊಮ್ಮಗನ ಜ್ಞಾನ ದಾಹ- ಆಧ್ಯಾತ್ಮದ ಆಸಕ್ತಿಯನ್ನು  ಮನಗಂಡ, ತಾತ ಮೊಮ್ಮಗನನ್ನು  ಪ್ರೀತಿ ಗೌರವದಿಂದ ಗುರುಗಳೇ ಎಂದೇ ಕರೆಯುತ್ತಿದ್ದರಂತೆ.
ಬಾನಂದೂರಿನಲ್ಲಿ  ಪ್ರಾಥಮಿಕ ಶಿಕ್ಷಣ, ಬಿಡದಿಯಲ್ಲಿ  ಮಾಧ್ಯಮಿಕ ಶಾಲಾ ಶಿಕ್ಷಣ ವ್ಯಾಸಂಗ ಮಾಡಿದರು. ರಾಮನಗರದ ವಿವಿದೋದ್ಧೇಶ ಪ್ರೌಢಶಾಲೆಯಲ್ಲಿ  ಪ್ರೌಢ ಶಿಕ್ಷಣ ಪೂರೈಸಿದರು. ರಜೆಯಲ್ಲಿ  ಊರಿಗೆ ಬಂದಾಗ ಬಾನಂದೂರಿನ ಮಗೆಕೆರೆ ಬಳಿ ಇರುವ ಹಿಪ್ಪೆ ಮರದ ಕೆಳಗೊಂದು ಕಲ್ಲಿನ ಜಗುಲಿ ಮೇಲೆ ಕುಳಿತು ಗಾಢವಾಗಿ ಚಿಂತಿಸುತ್ತಿದ್ದರಂತೆ.
ಬದುಕಿನ ಸಾರ್ಥಕತೆಯ ಬಗ್ಗೆ  ನಡೆಯುತ್ತಿದ್ದ  ಅವರ ಮನೋ ಮಥನ ಚಿಂತನ ಮುಂದೆ ಅವರು ಸ್ವೀಕರಿಸಿದ ಸನ್ಯಾಸ ವ್ರತಕ್ಕೆ  ಹಿಪ್ಪೆ  ಮರ, ಬೋದಿ ವೃಕ್ಷದಷ್ಟೆ  ಪವಿತ್ರವಾದುದು ಗಂಗಾಧರಯ್ಯನವರಿಗೆ ಮಿತಾಹಾರಿಯಾದ ಇವರು ರಾಗಿ ಮುದ್ದೆ  ಸೊಪ್ಪಿನ ಸಾರು ಪ್ರಿಯರು ಕೆಲಸದಲ್ಲಿ  ಅತಿ ಚುರುಕು ಲೌಕಿಕದ ವಿಷಯಗಳಲ್ಲಿ  ಅವರು ಅಂಟಿಯೂ ಅಂಟದಂತಿದ್ದರು. ಅಮೂರ್ತ ವಿಷಯಗಳ ಬಗ್ಗೆ  ಚಚರ್ಿಸಿ ತಿಳಿದುಕೊಳ್ಳಲಿಚ್ಛಿಸುತ್ತಿದ್ದ  ಗಂಗಾಧರಯ್ಯ ಅಧ್ಯಾಪಕರುಗಳಿಗೆ ವಿಶಿಷ್ಠ ವಿದ್ಯಾಥರ್ಿಯಾಗಿ ಕಾಣಿಸುತ್ತಿದ್ದರು. ಮನಸ್ಸಿಗೆ ಮೀರಿದ ಆಧ್ಯಾತ್ಮಿಕ ಪ್ರೀತಿ ಅವರಿಗೆ ಸಹಜ ವೈರಾಗ್ಯವನ್ನುಂಟು ಮಾಡಿದ್ದಿತು.
ಬೆಂಗಳೂರಿನ ಸಕರ್ಾರಿ ಕಲಾ ಮತ್ತು  ವಿಜ್ಞಾನ ಕಾಲೇಜಿನಲ್ಲಿ  ವಿಜ್ಞಾನ ವಿಷಯದಲ್ಲಿ  ಪದವಿ ಪೂರ್ವ ತರಗತಿಗೆ ಸೇರಿದ ಗಂಗಾಧರಯ್ಯ ಸಾಧುಸಂತರಿಗೆ ಆಶ್ರಯತಾಣವಾಗಿದ್ದ ಸಂಪಂಗಿರಾಮನಗರದ ಹತ್ತಿರವಿರುವ ಚಿದ್ಗಗನಾನಂದಾಶ್ರಮದಲ್ಲಿ  ವಾಸವಿದ್ದರು. ಅಲ್ಲಿ  ಂುೋಗಿಗಳೊಬ್ಬರು  ಗಂಗಾಧರಯ್ಯನನ್ನು   ನೋಡಿ ಈತ ಸಾಮಾನ್ಯ ಮಾನವನಲ್ಲ  ಯುಗದ ಮಹಾಪುರುಷ ಶರಣರ ಸುಳಿವನ್ನು  ಶರಣರೇ ಬಲ್ಲರು ಎಂದಿದ್ದರಂತೆ.
ಪ್ರಾಣಿ ಹಿಂಸೆ ಸಹಿಸದ ಗಂಗಾಧರಯ್ಯ ತುಂಬಾ ದಯಾಳುವಾಗಿದ್ದರು. ಎತ್ತುಗಳನ್ನು  ಅಮಾನುಷವಾಗಿ ದುಡಿಸಿಕೊಂಡರೆ ಹಾಲು ಕರೆಯದ ಹಸುಗಳನ್ನು  ಹೊಡೆದರೆ ಅವರ ಕಣ್ಣಲ್ಲಿ  ನೀರು ತುಂಬಿರುತ್ತಿತ್ತು . ನಾಗರ ಹಾವೊಂದು ಒಮ್ಮೆ  ಅವರ ಕೊಠಡಿಗೆ ನುಗ್ಗಿದಾಗ, ಮತ್ತೊಮ್ಮೆ  ಗದ್ದೆಯಲ್ಲಿ  ಹೆಡೆ ಎತ್ತಿದಾಗ ಅವರು ಕೊಲ್ಲಲಿಲ್ಲ. ಇಂತಹ ಮೃದು ಮನಸ್ಸಿನ ಯುವಕ ಏಕಾಂತ ಪ್ರಿಯರಾಗಿ ನಿಸರ್ಗ ಪ್ರೇಮಿಗಳಾಗಿದ್ದರು. ಒಮ್ಮೆ  ಲಾಲ್ಬಾಗಿಗೆ ಹೋಗಿದ್ದಾಗ ಬಿರುಗಾಳಿಗೆ ಮರ ಹೊಂದರ ಬಲವಾದ ಕೊಂಬೆ ಮುರಿದು  ಆ ಮರದ  ಕೆಳಗೆ ಕುಳಿತ್ತಿದ್ದಂತಹ ಇವರ ಮೇಲೆ ಬೀಳದೆ ಅದ್ಭುತವೆನ್ನುವಂತೆ  ಕೂದಲೆಳೆಯಲ್ಲಿ  ತಪ್ಪಿ  ಹೋಯಿತಂತೆ. ಲೌಕಿಕ ಜೀವನದ ಬಗ್ಗೆ  ನಿರಾಸಕ್ತರಾದ ಗಂಗಾಧರಯ್ಯನವರಿಗೆ ಈ ಘಟನೆಯಿಂದ ತಾವು ಯಾವುದೋ ಒಂದು ಮಹತ್ಕಾರ್ಯದ ಸಲುವಾಗಿ ಬದುಕಬೇಕಾಗಿದೆ. ಅದು ದೈವೇಚ್ಛೆ  ಎಂಬ ಭಾವನೆ ಬಲವಾಯಿತು.
ಇವರು ಪದವಿಗೆ ಸೇರುವ ಮುನ್ನ  ತಾವು ಓದಿದ ಪ್ರೌಢಶಾಲೆಯಲ್ಲಿ  ಕೆಲತಿಂಗಳಕಾಲ ಗುಮಾಸ್ತರಾಗಿ ಕೆಲಸಕ್ಕೆ  ಸೇರಿಕೊಂಡ ಗಂಗಾಧರಯ್ಯ ಸಮಯವನ್ನು  ವ್ಯರ್ಥಮಾಡದೆ ಆಡಳಿತದನುಭವವನ್ನು  ಗಳಿಸಿಕೊಂಡರೆನ್ನಬಹುದು. ಆ ಸಮಯದಲ್ಲಿ   ಶ್ರೀಯುತರು ಆದಿಚುಂಚನಗಿರಿ ಮಠಾಶರನ್ನು   ಕಾಣ ಬಯಸಿ ಬರೆದ ಪತ್ರ ಅವರ ವಿನಯ ಸಂಸ್ಕೃತಿ ವಿದ್ಯೆಯ ಬಗೆಗಿನ ಆಸಕ್ತಿ ಹಾಗೂ ಆಧ್ಯಾತ್ಮಿಕ ಬಲವನ್ನು  ತೋರಿಸುವಂತಿದೆ. ಅವರ ಧೈರ್ಯ ಹಾಗೂ ಸಮಯ ಸ್ಫೂತರ್ಿ ಗುಣಗಳು ಅನೇಕ ಸಂದರ್ಭದಲ್ಲಿ  ವೇದ್ಯವಾಗುತ್ತವೆ.
ತಮ್ಮಲ್ಲಿದ್ದಂತಹ ಸದ್ಗುಣಗಳಿಂದ ಊರಿನವರ ಪ್ರೀತಿಗಳಿಸಿಕೊಂಡಿದ್ದಂತಹ ಗಂಗಾಧರಯ್ಯನವರಿಗೆ ಲೋಕ ಪ್ರೀತಿಯ ಗಳಿಕೆಗೂ ಕಾಲ ಒದಗಿ ಬಂತು ಸನ್ಯಾಸಿಯಾಗುವ ಅವರ ಆಸೆ ಫಲಿಸುವ ವೇಳೆ ಸನ್ನಿಹಿತವಾಗಿತ್ತು  . ಕನಸಿನಲ್ಲಿ  ಸದಾ ಬಾ ಬಾ ಕಂದ ಎಂದು ಕೈ ಬೀಸಿ ಕರೆಯುತ್ತಿದ್ದ  ಕಾಲಭೈರವೇಶ್ವರನು ಅವರನ್ನು  ಆದಿಚುಂಚನಗಿರಿ ಕ್ಷೇತ್ರದ ಸೇವೆ ಮಾಡಲು ನಿಜವಾಗಿಯು ಕರೆಸಿಕೊಂಡ.
ಶ್ರೀ ರಾಮಾನಂದನಾಥ ಸ್ವಾಮಿಗಳು ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಾಗ, ಆದಿಚುಂಚನಗಿರಿ ಪೀಠಕ್ಕೆ  ಂುೋಗ್ಯರಾದ ಉತ್ತರಾಕಾರಿಗಳ ಆಂುೆ್ಕು  ಅನಿವಾರ್ಯವಾಯಿತು. ಂುೋಗ್ಯ ಅಭ್ಯಥರ್ಿಗಳು ಬೇಕೆಂಬ ಪ್ರಕಟಣೆ ಪತ್ರಿಕೆಯಲ್ಲಿ  ಬಂತು. ಬಾಯಾರಿದವನಿಗೆ ತಿಳಿ ನೀರು ದೊರೆತಂತಾಗಿ ಭಗವಂತನ ಸೇವೆ ಮಾಡಲೋಸುಗ ಸನ್ಯಾಸ ಸ್ವೀಕರಿಸಲು ಹರ್ಷಚಿತ್ತರಾಗಿ ಆರಾಧ್ಯದೈವ ಸಾನ್ನಿಧ್ಯವಾದ ಚುಂಚನಗಿರಿಗೆ ತೆರಳಿದರು. ಭಕ್ತರ ಇಚ್ಛೆಯಂತೆ ಇಬ್ಬರು ಶಿಷ್ಯರನ್ನು  ಶ್ರೀ ರಾಮಾನಂದನಾಥ ಸ್ವಾಮಿಗಳು ಆಂುೆ್ಕು  ಮಾಡಿದರು. ಅವರಲ್ಲಿ  ಗಂಗಾಧರಯ್ಯ  ಒಬ್ಬರು. ತಾಯ್ತಂದೆಯರ ಅನುಮತಿಂುೊಂದಿಗೆ ಗಂಗಾಧರಯ್ಯ ಶ್ರೀಕ್ಷೇತ್ರಕ್ಕೆ ತೆರಳಲು ಸಿದ್ಧರಾದರು. ಊರೆಲ್ಲಾ  ಸಿಂಗಾರಗೊಂಡು ಆದರಾಬಿಮಾನದಿಂದ  ಬೀಳ್ಕೊಟ್ಟರು. ಆ ಸಂದರ್ಭದಲ್ಲಿ  ಮಾತನಾಡಿದ ಗಂಗಾಧರಯ್ಯ ವಿ ಆಡಿಸಿದಂತೆ ಆಡುವ ಗೊಂಬೆ ನಾನು , ಬುದ್ಧನ ಜೀವನ ಹೇಗೆ ತಮಗೆ ಮಾದರಿಯಾಯಿತೆಂಬುದನ್ನು  ಅದರೊಡನೆಂುೆು ಸನ್ಯಾಸಿಯಾಗಬೇಕೆಂಬ ತಮ್ಮ  ಗುರಿಯ ಸಮರ್ಥನೆಯನ್ನು  ನಿವೇದಿಸಿದ್ದರು ಮುಂದೆ ಅವರು ದಣಿವರಿಯದ ಕರ್ಮಂುೋಗಿಯಾಗಿ ರೂಪುಗೊಳ್ಳಲು  ಇದೇ ಮಹಾಮಂತ್ರವಾಯಿತು.
ತಮ್ಮ  ಮಗನನ್ನು  ಮಹಾಮಣಿಹಕ್ಕೆ  ಒಪ್ಪಿಸಿದ ತಾಯಿ ಬೋರಮ್ಮನವರ ಹರಕೆ ಗಂಗಾಧರಯ್ಯನವರಿಗೆ ಶ್ರೀರಕ್ಷೆಯಾಯಿತು. ಮಗು, ಈತನಕ ನಮಗೆ ಕಣ್ಮಣಿಯಾಗಿದ್ದ  ನೀನು, ಮುಂದೆ ಅಸತ್ಯ ಅಜ್ಞಾನಗಳನ್ನು  ನಿವಾರಿಸಿ ಸತ್ಯಧರ್ಮಗಳನ್ನುದ್ಧರಿಸುವ ಜಗಜ್ಯೋತಿಯಾಗು. ನೊಂದವರ ನೋವು ನಿವಾರಿಸುವ ಬವಣೆಗಳಲ್ಲಿ  ಬೆಂದವರಿಗೆ ಬದುಕು ಕೊಡು, ತಾಯಿಯಿಂದ  ಹೃದಯ ತುಂಬಿ ಬಂದ ಮಾತುಗಳಿವೆ. ನಂತರ ಗಂಗಾಧರಯ್ಯನವರು ತಮ್ಮ   ಕನಸ್ಸು ಮನಸ್ಸುಗಳ ತುಂಬ ತುಂಬಿ ಕೊಂಡಿದ್ದ  ಪುಣ್ಯಭೂಮಿ ಕರ್ಮಭೂಮಿ ಚುಂಚನಗಿರಿಗೆ ಬಂದು, ಆಧ್ಯಾತ್ಮ  ಗಗನದಲ್ಲಿ  ದೂರ ದೂರಕ್ಕೆ  ತ್ಯಾಗವಿಮಾನದಲ್ಲಿ  ಹಾರಲು ಅಣಿಯಾದರು. ಶ್ರೀಗಳು ಹುಟ್ಟಿ  ಬೆಳೆದ  ಬಾನಂದೂರಿನ ಮನೆ ಇಂದು ಧ್ಯಾನ ಮಂದಿರವಾಗಿ ರೂಪುಗೊಂಡು ಊರಿನಲ್ಲಿ  ತ್ಯಾಗ ಭಕ್ತಿಗಳ ಕಂಪನ್ನು  ನಿತ್ಯ ಪಸರಿಸುತ್ತಿದೆ.
ಅಂದಿನ ಪೀಠಾಪತಿಗಳಾದ ಗುರು ಶ್ರೀ ರಾಮಾನಂದನಾಥರು 12-02-1968ರಂದು ವಿದ್ಯುಕ್ತವಾಗಿ ಮಂತ್ರೋಪದೇಶ ಮಾಡಿ ಸನ್ಯಾಸ ದೀಕ್ಷೆ ನೀಡಿ ಬಾಲಗಂಗಾಧರನಾಥ ಸ್ವಾಮಿಗಳೆಂದು ನೂತನ ಅಬಿದಾನ ಮಾಡಿದರು. ನಂತರ ಅದ್ವೆ ತ ವೇದಾಂತ ಸಂಸ್ಕೃತ ಪದವಿ ಪಡೆಯಲೆಂದು ಬೆಂಗಳೂರಿಗೆ ಹೋಗಿ ಕೈಲಾಸಾಶ್ರಮದಲ್ಲಿದ್ದು  ಶ್ರೀ ತಿರುಚ್ಚಿ  ಸ್ವಾಮಿಗಳ ಸಾನ್ನಿಧ್ಯದಲ್ಲಿ  ಅವರ ತತ್ವ ವಿಚಾರಗಳು ಇನ್ನಷ್ಟು  ಸ್ಪುಟಗೊಳ್ಳಲು  ಅನುಕೂಲವಾಯಿತು. ನಂತರ ಗುರುಗಳ ಶುಶ್ರೂಷೆಗೆ ವಾಪಸ್ಸಾದ ಶ್ರೀಗಳು ರಾಮಾನಂದನಾಥ ಸ್ವಾಮಿಗಳ ಶಿವಸಾಯುಜ್ಯದ ನಂತರ ಭಕ್ತ ಕೋಟಿಯ ಇಚ್ಛೆಯಂತೆ 25-09-1974ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಪತಿಗಳಾಗಿ ಸಾಂಪ್ರದಾಯಿಕ ವಿ ವಿಧಾನಗಳ ಮೂಲಕ ಸಿದ್ಧ ಸಿಂಹಾಸನ ವೇರಿದರು. ಶ್ರೀಗಳು ಪಟ್ಟಕ್ಕೆ  ಬಂದ ದಿನ ಹಿತವಾದ ಮಳೆ  ಆಹ್ಲಾದಕರ ವಾತಾವರಣ ತಂಪಾಗಿ  ಗಂಗಾಧರೇಶ್ವರ ಸ್ವಾಮಿ ದೇವಾಲಯದ  ಗಂಟೆ ಅನಿರೀಕ್ಷಿತವಾಗಿ ತಂತಾನೆ ನಿನಾಸಿತೆಂದು ಆಗಿನ ಜನರೇ ಹೇಳುತ್ತಾರೆ ಒಳ್ಳೆಯ ಕೆಲಸದಲ್ಲಿ  ಪ್ರಕೃತಿಯು ಪರವಾನಗಿ ನೀಡುತ್ತದೆಂಬುದೇ ಇದರ ಹಿಂದಿರುವ ಸತ್ಯ. 2000 ವರ್ಷಗಳ ಇತಿಹಾಸವನ್ನೊಂದಿರುವ ಶ್ರೀಕ್ಷೇತ್ರದ 71ನೇಯ ಪೀಠಾಪತಿಗಳಾದ ಶ್ರೀಗಳವರ ಪವಾಡ ಸದೃಶ ಸಾಧನೆಗಳು ಚುಂಚನಗಿರಿಯ ಇತಿಹಾಸದಲ್ಲಿ  ಸುವಣರ್ಾಕ್ಷರಗಳಲ್ಲಿ  ಬರೆದಿಡಬೇಕಾದಂತಹುದು . 

ಲೇಖನ :- ಪ್ರೊ  ಸಿ.ನಂಜುಂಡಯ್ಯ
ಪ್ರಾಚಾರ್ಯರು
ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯ
ಶ್ರೀ ಆದಿಚುಂಚನಗಿರಿ ಕ್ಷೇತ್ರ




No comments:

Post a Comment